Dr. Murali H V

Dr. Murali H V Contact information, map and directions, contact form, opening hours, services, ratings, photos, videos and announcements from Dr. Murali H V, Doctor, Hebbagodi Road, Vinayaka Nagar, Hebbagodi, Bangalore.

ಮೂಢನಂಬಿಕೆಯ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ದೂರ ಮಾಡಿ, ಶೋಷಿತರು ಮತ್ತು ಬಲಹೀನರ ಬದುಕಿಗೆ ಕರುಣೆ, ಸಮತೆ ಹಾಗೂ ಆತ್ಮವಿಶ್ವಾಸದ ದಾರಿಯನ್ನು ತ...
01/05/2026

ಮೂಢನಂಬಿಕೆಯ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ದೂರ ಮಾಡಿ, ಶೋಷಿತರು ಮತ್ತು ಬಲಹೀನರ ಬದುಕಿಗೆ ಕರುಣೆ, ಸಮತೆ ಹಾಗೂ ಆತ್ಮವಿಶ್ವಾಸದ ದಾರಿಯನ್ನು ತೋರಿದ, ಮಾನವತೆಯ ಮೌಲ್ಯಗಳನ್ನು ವಿಶ್ವಕ್ಕೆ ಸಾರಿದ ಮಹಾನ್ ತತ್ವಜ್ಞಾನಿ ಭಗವಾನ್ ಬುದ್ಧರ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಎಲ್ಲರಿಗೂ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

#ಬುದ್ಧಪೂರ್ಣಿಮಾ

ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕುತೆರನನರಿಯದೇ ತನಿರಸದ,ಹೊರಗಣೆಲೆಯನೇ ಮೇದುವು!ನಿಮ್ಮನರಿವ ಮದಕರಿಯಲ್ಲದೆಕುರಿಯೇನ ಬಲ್ಲುದೋ ಕೂಡಲಸಂಗಮದೇವ ...
20/04/2026

ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು
ತೆರನನರಿಯದೇ ತನಿರಸದ,
ಹೊರಗಣೆಲೆಯನೇ ಮೇದುವು!
ನಿಮ್ಮನರಿವ ಮದಕರಿಯಲ್ಲದೆ
ಕುರಿಯೇನ ಬಲ್ಲುದೋ ಕೂಡಲಸಂಗಮದೇವ ?

ಬಸವಣ್ಣನವರ ತತ್ವಗಳು ಮೌಢ್ಯ, ಕಂದಾಚಾರ, ಅಸಮಾನತೆಗಳ ಕತ್ತಲೆಯನ್ನು ತೊಲಗಿಸುವ ಜಗತ್ತಿಗೆ ಜ್ಯೋತಿಯಾಗಿ ಬೆಳಕು ನೀಡಿದೆ. ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿಯೇ ಸಮಾಜ ಸುಧಾರಣೆಯ ಕ್ರಾಂತಿ ಸೃಷ್ಟಿಸಿದ ಬಸವಣ್ಣನವರು “ಆಚಾರವೇ ಸ್ವರ್ಗ, ಅನಾಚಾರವೇ ನರಕ“ ಎನ್ನುತ್ತಾ ಬದುಕಿನ ಮೌಲ್ಯಗಳನ್ನು ಹೇಳುವುದರೊಂದಿಗೆ ಮೌಢ್ಯದ ಪೊರೆಯನ್ನೂ ಕಳಚಿದರು,

ಇವನಾರವ ಎಂದೆನಿಸದೆ ಇವ ನಮ್ಮವ ಎಂದೆನಿಸಯ್ಯ ಎನ್ನುವ ಮೂಲಕ ಭ್ರಾತೃತ್ವ, ಸಹಬಾಳ್ವೆ, ಸಮಾನತೆಯನ್ನು ಪಸರಿಸಿದರು. 'ಕಾಯಕವೇ ಕೈಲಾಸ' ಎಂದು ದುಡಿಮೆಯೇ ನಿಜವಾದ ಆರಾಧನೆ ಎಂಬ ವಿಚಾರಧಾರೆಯನ್ನು ತಿಳಿಸಿದರು. ಸರಳ ಭಾಷೆಯಲ್ಲಿ ಶ್ರೇಷ್ಠ ಚಿಂತನೆಗಳನ್ನು ಬಿತ್ತಿದ ಮಹಾನ್ ಮಾನವತಾವಾದಿ ಬಸವಣ್ಣನವರು.

ನಮಗಿರಲಿ ಬಸವ ತತ್ವಗಳ ಅರಿವು, ಸಮತೆಯತ್ತ ಮುನ್ನಡೆಯಲಿ ಜಗವು. ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು.



ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳುಈ ಸಂಕ್ರಾಂತಿ ನಿಮ್ಮ ಜೀವನಕ್ಕೆ ಹೊಸ ಉತ್ಸಾಹ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.ಎ...
15/01/2026

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಸಂಕ್ರಾಂತಿ ನಿಮ್ಮ ಜೀವನಕ್ಕೆ ಹೊಸ ಉತ್ಸಾಹ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.
ಎಲ್ಲರ ಮನಸ್ಸುಗಳಲ್ಲಿ ಬೆಳಕು, ಬದುಕಿನಲ್ಲಿ ಸುಖ-ಶಾಂತಿ ನೆಲಸಲಿ ಎಂದು ಆಶಿಸುತ್ತೇನೆ.

#ಸಂಕ್ರಾಂತಿ #ಶುಭಸಂಕ್ರಾಂತಿ #ಕನ್ನಡಸಂಸ್ಕೃತಿ



ಬಮೂಲ್ ಅಧ್ಯಕರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆದ ಶ್ರೀ DK Suresh  ಅವರಿಗೆ ಹಾ...
18/12/2025

ಬಮೂಲ್ ಅಧ್ಯಕರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆದ ಶ್ರೀ DK Suresh ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು.

ಜನಸೇವೆ, ಸಂಘಟನಾ ಬದ್ಧತೆ ಮತ್ತು ಪಕ್ಷದ ಬಲವರ್ಧನೆಗಾಗಿ ಅವರ ನಿರಂತರ ಶ್ರಮ ಶ್ಲಾಘನೀಯ. ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಇನ್ನಷ್ಟು ವಿಸ್ತಾರವಾಗಲಿ. ಆರೋಗ್ಯ, ಯಶಸ್ಸು ಮತ್ತು ದೀರ್ಘ ಆಯುಷ್ಯ ದೊರಕಲಿ ಎಂದು ಹಾರೈಸುತ್ತೇವೆ.




06/12/2025

ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ, ಜಾತಿ ಪದ್ಧತಿ, ಲಿಂಗಭೇದ, ಅಸಮಾನತೆ ವಿರುದ್ಧ ಹೋರಾಡಿ ಶೋಷಿತ ಸಮುದಾಯದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಮಹಾಪರಿನಿರ್ವಾಣ ಹೊಂದಿದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು.

ಅವರನ್ನು ಓರ್ವ ಮಾರ್ಗದರ್ಶಿಯನ್ನಾಗಿ ಸ್ವೀಕರಿಸಿ, ಅವರು ತೋರಿಸಿ ಕೊಟ್ಟ ಹಾದಿಯಲ್ಲಿ ಅವರ ಯೋಚನೆ ಮತ್ತು ದೂರದೃಷ್ಟಿಯನ್ನು ಅರ್ಥಮಾಡಿಕೊಂಡು ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವದಡಿ ಸಮಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡೋಣ.
DrMurali HV





ಜಲವೆ ಸಕಲ ಕುಲಕೆ ತಾಯಲ್ಲವೇ?ಜಲದ ಕುಲವೇನಾದರು ಬಲ್ಲಿರಾ?ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೇ ದೇಹನೆಲೆಯರಿತು ನೀ ನೆನೆ ಕಂಡ್ಯ ಮನುಜನಾಡಿನ ಸಮಸ್ತ ಜ...
08/11/2025

ಜಲವೆ ಸಕಲ ಕುಲಕೆ ತಾಯಲ್ಲವೇ?
ಜಲದ ಕುಲವೇನಾದರು ಬಲ್ಲಿರಾ?
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೇ ದೇಹ
ನೆಲೆಯರಿತು ನೀ ನೆನೆ ಕಂಡ್ಯ ಮನುಜ

ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
ಜಾತಿ, ಕುಲ, ಮತಗಳ ಸಂಕೋಲೆಗಳನ್ನು ಬಿಟ್ಟು ಭಕ್ತಿಯ ಸಂದೇಶ ಸಾರಿದ ಕನಕದಾಸರಿಗೆ ಭಕ್ತಿಪೂರ್ವಕ ನಮನಗಳು





"ಒಬ್ಬ ವ್ಯಕ್ತಿ - ಒಂದು ಮತ - ಒಂದು ಮೌಲ್ಯ"ವೆಂಬ ಸಂವಿಧಾನದ ಮೂಲ ಆಶಯದ ರಕ್ಷಣೆಗಾಗಿ ಇಂದು ನಾನು ಕೂಡ ಸಹಿ ಹಾಕಿದ್ದೇನೆ. ಈ ಹೋರಾಟದಲ್ಲಿ ನನ್ನ ಜ...
13/08/2025

"ಒಬ್ಬ ವ್ಯಕ್ತಿ - ಒಂದು ಮತ - ಒಂದು ಮೌಲ್ಯ"ವೆಂಬ ಸಂವಿಧಾನದ ಮೂಲ ಆಶಯದ ರಕ್ಷಣೆಗಾಗಿ ಇಂದು ನಾನು ಕೂಡ ಸಹಿ ಹಾಕಿದ್ದೇನೆ.

ಈ ಹೋರಾಟದಲ್ಲಿ ನನ್ನ ಜೊತೆಯಾಗಿ:
ಇಲ್ಲಿ‌ ಸಹಿ ಮಾಡಿ: http://votechori.in‌
ಅಥವಾ
ಈ ನಂಬರಿಗೆ ಮಿಸ್ ಕಾಲ್ ಮಾಡಿ: 9650003420

ನಿಮ್ಮ ಮತವನ್ನು ರಕ್ಷಿಸಿ - ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿ.


Indian National Congress | Indian National Congress - Karnataka
Rahul Gandhi Mallikarjun Kharge - President DK Shivakumar



ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ||ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯ...
10/07/2025

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ||

ಜೀವನದಲ್ಲಿ ಪೋಷಕರ ಪಾತ್ರ ಎಷ್ಟಿದೆಯೋ, ಗುರುಗಳ ಪಾತ್ರವೂ ಅಷ್ಟೇ ಪ್ರಮುಖ. ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. ತಮಗೆಲ್ಲರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.





ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು.ಸುಧೀರ್ಘ 56 ವರ್ಷಗಳ ಕಾಲ ಆಡಳಿತ ನಡೆಸಿದ್ದ ಶ್ರೀಯುತರು ವಿಜಯನಗರ ಸಾಮ...
27/06/2025

ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು.

ಸುಧೀರ್ಘ 56 ವರ್ಷಗಳ ಕಾಲ ಆಡಳಿತ ನಡೆಸಿದ್ದ ಶ್ರೀಯುತರು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಂಡು ಅಂತಹ ಒಂದು ನಗರದ ಸ್ಥಾಪನೆಯ ಕನಸನ್ನು ಹೊತ್ತು, ಶ್ರಮ ವಹಿಸಿ ನಿರ್ಮಿಸಿದಂತಹ ನಗರ ಬೆಂಗಳೂರು. 1000 ಕೆರೆಗಳನ್ನು ನಿರ್ಮಿಸಿ, ಅಭಿವೃದ್ಧಿಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಪ್ರದೇಶದ ಸಂಪನ್ಮೂಲವನ್ನು ಅರಿತು ಮುಂದಿನ ಜನಾಂಗಕ್ಕೆ ಅಗತ್ಯವಾದ ಸೌಕರ್ಯಗಳನ್ನು ಆಗಲೇ ನಿರ್ಮಿಸಿದ್ದರು. ಉಧ್ಯಾನನಗರಿ, ಅವಕಾಶಗಳ, ಅಭಿವೃದ್ಧಿಯ ಆಗರ ಎಂದರೆ ತಪ್ಪಾಗಲಾರದು. ಇಂದು ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಗಮನರ್ಹ ಸಾಧನೆಯನ್ನು ಮಾಡಿದೆ. ಇಂತಹ ಬೆಂಗಳೂರನ್ನು ಕಟ್ಟಿ ಬೆಳೆಸಿದ ಶ್ರೀಯುತರಿಗೆ ನಾವು ಕನ್ನಡಿಗರು ಎಂದಿಗೂ ಚಿರಋಣಿ.



ಈ ಸಲ ಕಪ್ ನಮ್ದು! Congratulations RCB! 🏆🔥WHAT A TEAM. WHAT A WIN.After 18 long years of passion, perseverance, and unforge...
03/06/2025

ಈ ಸಲ ಕಪ್ ನಮ್ದು!

Congratulations RCB! 🏆🔥
WHAT A TEAM. WHAT A WIN.

After 18 long years of passion, perseverance, and unforgettable moments, Royal Challengers Bangalore finally lift the trophy! This isn’t just a win—it’s HISTORY.

Address

Hebbagodi Road, Vinayaka Nagar, Hebbagodi
Bangalore
560099

Website

Alerts

Be the first to know and let us send you an email when Dr. Murali H V posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Murali H V:

Share

Category