10/07/2026
ನನ್ನ ಜೀವನದ ಪರಿವರ್ತನೆಯ ಕಥೆ
ಅಂದು ಒಂದು ದಿನ ಸಂಜೆ ಎಲ್ಲರೂ ಮನೆಯಲ್ಲಿ ಕೂತು ಮಾತಾಡುವಾಗ ಅನಿಸಿತು. ಐದು ವರ್ಷಗಳ ಹಿಂದೆ ಎಷ್ಟೊಂದು ನೋವು! ಅನಾರೋಗ್ಯದಿಂದ ಬಳಲುತ್ತಾ, ಅದರಿಂದ ಹೊರಬರಲು ಎಷ್ಟೆಲ್ಲಾ ಹೋರಾಟ ಮಾಡುತ್ತಿದ್ದೆವು. ಆದರೆ ಇಂದು ಇಷ್ಟೊಂದು ಖುಷಿ ಇದೆ, ಸಂತೋಷ ಇದೆ, ನೆಮ್ಮದಿ ಇದೆ. ಎಲ್ಲರಲ್ಲೂ ಹೊಂದಾಣಿಕೆ ಇದೆ. ಆಗ ಇವು ಯಾವುದೂ ಇರಲಿಲ್ಲ. ಅನಾರೋಗ್ಯದಿಂದ ಸಾಕಷ್ಟು ನೋವಿನಲ್ಲಿ ಇದ್ದೆವು.
ಇಂದು ನಾನು ಹೆಲ್ತ್ ಮತ್ತು ವೆಲ್ನೆಸ್ ಕೋಚ್ ಆಗಬೇಕು ಎಂದು ನಿರ್ಧರಿಸಲು ಕಾರಣ, ನಮ್ಮ ಮನೆಯಲ್ಲಿದ್ದ ಆ ಅನಾರೋಗ್ಯದ ಪರಿಸ್ಥಿತಿ ಮತ್ತು ನೋವಿನ ಅನುಭವ. ಇಂತಹ ನೋವಿನಲ್ಲಿ ಇನ್ನೂ ಎಷ್ಟೋ ಕುಟುಂಬಗಳಿವೆ. ನನ್ನ ಕುಟುಂಬ ಹೇಗೆ ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಬಂದಿದೆಯೋ, ಅದೇ ರೀತಿಯಾಗಿ ಸಾವಿರಾರು ಜನರಿಗೆ ಆರೋಗ್ಯದ ಮಾಹಿತಿಯನ್ನು ನೀಡಿ, ಅವರನ್ನು ಆರೋಗ್ಯದ ಕಡೆಗೆ ಕರೆದೊಯ್ಯಬೇಕು ಎಂಬ ದೃಢ ನಿರ್ಧಾರ ಮಾಡಿದೆ. ಆ ಖುಷಿ ಎಲ್ಲರ ಜೀವನದಲ್ಲೂ ಕಾಣಬೇಕು ಎಂಬುದೇ ನನ್ನ ಉದ್ದೇಶ.
ಯಾವಾಗಲೂ ಅಪ್ಪ ಹೇಳುತ್ತಿದ್ದರು, "ತಪ್ಪು ಮಾಡಬಾರದು, ಮೋಸ ಮಾಡಬಾರದು, ಸುಳ್ಳು ಹೇಳಬಾರದು." ಅವರು ಯಾವಾಗಲೂ ನ್ಯಾಯಮಾರ್ಗದಲ್ಲಿ ನಡೆಯಬೇಕು, ರಾಜರಂತೆ ಬದುಕಬೇಕು, ದೇವರ ಮೇಲೆ ಭಕ್ತಿ ಇರಬೇಕು, ಯಾವುದೇ ಕೆಲಸ ಹಿಡಿದರೂ ನಂಬಿಕೆಯಿಂದ ಮಾಡಬೇಕು ಮತ್ತು ಮಧ್ಯದಲ್ಲಿ ಬಿಡಬಾರದು ಎಂದು ಹೇಳುತ್ತಿದ್ದರು. ಅಪ್ಪನವರ ನಡೆ-ನುಡಿ, ಅವರ ಜೀವನದ ಮೌಲ್ಯಗಳನ್ನು ನಾನು ನೋಡಿ, ಕೇಳಿ ಬೆಳೆದಿದ್ದರಿಂದ, ನಾನೂ ಹೀಗೆಯೇ ಇರಬೇಕು, ಹೀಗೆಯೇ ಬದುಕಬೇಕು ಎಂಬ ದೃಢ ನಿರ್ಧಾರವಾಯಿತು.
ಇಂದು ಹೆಲ್ತ್ ಮತ್ತು ವೆಲ್ನೆಸ್ ಕೋಚಿಂಗ್ ಮೂಲಕ ಸಾವಿರಾರು ಜನರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, ಅವರನ್ನು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಬರಲು ಮಾರ್ಗದರ್ಶನ ಮಾಡುತ್ತಿರುವುದು ನನ್ನ ಜೀವನದ ದೊಡ್ಡ ಸಂತೋಷವಾಗಿದೆ. ಇದರಿಂದ ಇಂದು ನನ್ನ ಕುಟುಂಬ ಖುಷಿಯಾಗಿ, ನೆಮ್ಮದಿಯಿಂದ ಮತ್ತು ಆರೋಗ್ಯದಿಂದ ಬದುಕಲು ಸಾಧ್ಯವಾಗಿದೆ.
ಅವರ ಆಶೀರ್ವಾದ ಮತ್ತು ನನ್ನ ಪರಿಶ್ರಮ ಹೀಗೆ ನಿರಂತರವಾಗಿ ಸಾಗುತ್ತಿದೆ.
ಥ್ಯಾಂಕ್ಸ್ ಅಪ್ಪ. ನಿಮ್ಮ ಜೀವನದ ಹಾದಿಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ನೀವು ಕಲಿಸಿದ ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.
ನಿಮ್ಮ ಜೀವನದ ಪರಿವರ್ತನೆಯ ವ್ಯಕ್ತಿ ಯಾರು ಎಂದು ಕಾಮೆಂಟ್ ಮಾಡಿ