29/07/2026
ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಇದರ ವತಿಯಿಂದ ಪ್ರತಿ ಗುರುವಾರ ಸಂಜೆ 7:00 ರಿಂದ 8:00 ರ ವರೆಗೆ “ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ” ದ ಕುರಿತು “ಉಚಿತ ನೇರ ಪೋನ್ ಇನ್ ಕಾರ್ಯಕ್ರಮ” ನಡೆಯುತ್ತಿದೆ. ದಿನಾಂಕ 30-07-2026 ಸಂಚಿಕೆ 131ರ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸೌಜನ್ಯ ಶೆಟ್ಟಿ (ಆಪ್ತಸಮಾಲೋಚಕರು ಹಾಗೂ ಆಡಳಿತಾಧಿಕಾರಿಗಳು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ) ಇವರು “ಮದ್ಯವ್ಯಸನ-ಕುಟುಂಬ ಚೇತರಿಕೆ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹೀಗೆ ಭಾಗವಹಿಸಿ.
1. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ "Free Conference call' App ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ - https://join.freeconferencecall.com/aakarnataka4 "
2. ಈ ಕರೆಗೆ ಯಾವುದೇ ಚಾರ್ಜಸ್ ಇಲ್ಲದೆಯೇ ಸಂಪರ್ಕಿಸಬಹುದು.
ನೀವೂ ಭಾಗವಹಿಸಿ, ಇತರಿಗೂ ತಿಳಿಸಿ.
ಧನ್ಯವಾದಗಳು